ಜೀನ್ಗೊಟ್ಟಿ ನನಹೇಂತಿ

ಜೀನ್ಗೊಟ್ಟಿ ನನಹೇಂತಿ ಕೈಕಟ್ಟ ಬಾಯ್ಕಟ್ಟ
ತೌರೋರು ಬಂದಾಗ ಹುಂಚಿಪಕ್ಕ
ಒಂದಕ್ಕ ಹತ್ತುಂಡಿ ಬುಟಿತುಂಬ ಹೋಳೀಗಿ
ಕರಿಗಡಬು ಹೆರತುಪ್ಪ ಚೊಕ್ಕಚೊಕ್ಕ ||೧||

ಗಂಡಗ ಚಮಚೆಯ ತುಪ್ಪಾನ ನೀಡಾಕಿ
ಅಣ್ಣಗ ತಂಬೀಗಿ ಸುರುವ್ಯಾಳ
ಮಕ್ಳೀಗೆ ಚಟ್ನೀಯ ಕಿರಿಬೆಳ್ಲೆ ಹಚ್ಚಾಕಿ
ತಮ್ಮಗ ಕೆನಿಮೊಸರು ಹಾಕ್ಯಾಳ ||೨||

ಅರಿಬೀಗಿ ಸಬಕಾರ ಅಂಚಂಚು ಹಚ್ಚಾಕಿ
ತಂಗೀಯ ಲಂಗಾಕ ಠಾಕುಠೀಕ
ಕುಂತಾರ ನನಸೀರಿ ಸವದೀತು ಅನ್ನಾಕಿ
ತವರೋರು ಬಂದಾಗ ಟ್ರಂಕುಪ್ಯಾಕ ||೩||

ನಾಟಕ ಗೀಟಕ ಯಾತಕ ಅನ್ನಾಕಿ
ಕ್ಯಾಬರೆ ಸಿನಿಮಾಕ ಕಳಿಸ್ಯಾಳ
ಕಾಲೀಗಿ ಬಿಸಿನೀರು ಕುಡಿಯಾಕ ಎಳನೀರು
ಹೊಟ್ಟಿ ಝಾಡಿಸುವಂಗ ಉಣಿಸ್ಯಾಳ ||೪||

ಇಷ್ಟ್ಯಾಕ ಅಂದರ ತೌರೋರು ತಂದಾರ
ನಿಮಗ್ಯಾಕ ಹೊಟಿಬ್ಯಾನಿ ಅಂತಾಳ
ಬಿಳಿಜೋಳ ತಂದಾರ ಗೋದೀಯ ಒಟ್ಯಾರ
ನೀವೇನು ಕೊಟ್ಟಿಲ್ಲ ಅಂದಾಳ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೮

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys